Books Published

ಶ್ರೀ ಶಂಕರಾನಂದ ಆಶ್ರಮದ ವತಿಯಿಂದ ಭಕ್ತರೆಲ್ಲರಿಗೂ ಹಾಗೂ ಅಧ್ಯಾತ್ಮ ಆಸಕ್ತರೆಲ್ಲರಿಗೂ ಸದುಪಯೋಗವಾಗಲೆಂದು ಹಲವಾರು ಅಧ್ಯಾತ್ಮ ಗ್ರಂಥಗಳನ್ನು ಈ ಆಶ್ರಮದ ಸಂಸ್ಥಾಪಕರು, ಗೌರವ ಅಧ್ಯಕ್ಷರಾದ ಶ್ರೀಶ್ರೀಶ್ರೀ ಪ್ರಭೋದಾನಂದ ಸ್ವಾಮಿಗಳು ಬರೆದಿರುತ್ತಾರೆ. ಈ ಗ್ರಂಥಗಳಲ್ಲಿ ಹಲವಾರು ಉಪನಿಷತ್ತುಗಳು, ಬ್ರಹ್ಮಸೂತ್ರಗಳು ಹಾಗೂ ಭಗವದ್ಗೀತೆಯ ಬಗ್ಗೆ ಉಪನ್ಯಾಸ ಲೇಖನವು ಇವೆ. ಇವೆಲ್ಲವೂ ಸಾಮಾನ್ಯ ಜನರನ್ನು ಈ ದುಃಖ ರೂಪವಾದ ಸಂಸಾರವೆಂಬ ಸಾಗರದಿಂದ ಪಾರು ಮಾಡಿ ಮೋಕ್ಷವನ್ನು ಪಡೆಯುವುದೇ ಆಗಿದೆ. ಕಬ್ಬಿಣ ಕಡಲೆ ಆದ ಉಪನಿಷತ್ತು ಹಾಗೂ ಬ್ರಹ್ಮಸೂತ್ರಗಳನ್ನು ಸರಳವಾಗಿ ಎಲ್ಲರ ಮನಸ್ಸಿಗೂ ಮುಟ್ಟುವಂತೆ ಕನ್ನಡ ಭಾಷೆಯಲ್ಲಿ ಬರೆಯಲಾಗಿದೆ. ಅಧ್ಯಾತ್ಮ ಆಸಕ್ತರು ಈ ಗ್ರಂಥಗಳನ್ನು ಓದಿ ತಮ್ಮ ಜನ್ಮವನ್ನು ಸಾರ್ಥಕ ಪಡಿಸಿಕೊಳ್ಳಿ.