Newsletter  


ಶ್ರೀ ಶಂಕರ ಶಾಂತಿ ಸಂದೇಶ


ಶಂಕರ ಶಾಂತಿ ಸಂದೇಶ ಪತ್ರಿಕೆಯ
ಚಂದಾ ವಿವರ:

ಮಹಾ ಅಭಿಮಾನಿಗಳು - ₹10000
ಅಭಿಮಾನಿಗಳು -₹5000
ಮಹಾ ಪೋ ಷಕರು-₹1500 (10 ವರ್ಷ ಕ್ಕೆ )
ಪೋ ಷಕರು - ₹750 (5 ವರ್ಷ ಕ್ಕೆ )

ಶಂಕರ ಶಾಂತಿ ಸಂದೇಶ ಪತ್ರಿಕೆಯ ಚಂದಾದಾರಾಗಲು ಬಯಸುವವರು ಹಾಗೂ ಆಶ್ರಮದಿಂದ ಪ್ರಕಟಣೆಗೊಂಡ ಅಧ್ಯಾತ್ಮ ಗ್ರ೦ಥಗಳು ಬೇಕಾದಲ್ಲಿ ಈ ಕೆಳಕಂಡ ಬ್ಯಾಂಕ್ ಖಾತೆಗೆ ನಿಮ್ಮ ಚಂದಾ/ ಅಧ್ಯಾತ್ಮಗ್ರಂಥಗಳ ಹಣವನ್ನು NEFT, RTGS, G- pay, Phone pe, Pay TM ಮುಖಾಂತರವೂ ತಲುಪಿಸಿ, ಈ ಕೆಳಕಂಡ ನಂಬರಿಗೆ ಫೋನ್ ಮುಖಾಂತರ ತಿಳಿಸಬೇಕಾಗಿ ವಿನಂತಿಸುತ್ತೇವೆ.

ಡಾII ಆನಂದಕುಮಾರ
Mobile No.: 855 348 3106 (WhatsApp)


ಬ್ಯಾಂ ಕ್ ವಿವರ:
ಶ್ರೀ ಶಂಕರಾನಂದ ಆಶ್ರಮ ಟ್ರಸ್ಟ್
ಬ್ಯಾಂಕ್ ಆಫ್ ಇಂಡಿಯಾ
ಜ್ಞಾನ ಜ್ಯೋತಿ ನಗರ ಬ್ರಾಂಚ್
ಉಳ್ಳಾಲ ರೋಡ್, ಬೆಂಗಳೂ ರು - 56
S B. A/C No.: 842410110012851
IFSC Code: BKID0008424


ಶ್ರೀ ಶಂಕರ ಶಾಂತಿ ಸಂದೇಶ ದ್ವೈಮಾಸಿಕ ಪತ್ರಿಕೆಯು ಶ್ರೀ ಶಂಕರಾನಂದ ಆಶ್ರಮವತಿಯಿಂದ ಪ್ರಕಾಶನಗೊಳ್ಳುತ್ತಿದೆ. ಈ ಪತ್ರಿಕೆ ಸಂಪೂರ್ಣವಾಗಿ ಅಧ್ಯಾತ್ಮಿಕ ಜ್ಞಾನ ಪ್ರಸಾರಕ್ಕಾಗಿ ಮೀಸಲಾಗಿಟ್ಟಿದೆ. ಇದರಲ್ಲಿ ಯಾವುದೇ ವಾಣಿಜ್ಯ ಜಾಹೀರಾತು ಇರುವುದಿಲ್ಲ.ಇದರಲ್ಲಿ ಬರುವ ವಿಷಯಗಳು ಉಪನಿಷತ್ತು ಹಾಗೂ ಭಗವದ್ಗೀತೆಯ ಸಾರಸಂಗ್ರಹವನ್ನು ಒಳಗೊಂಡಿದೆ.ವೇದಾಂತ ವಿಷಯಗಳನ್ನು ಅತ್ಯಂತ ಸರಳವಾಗಿ ಪಾಮರರಿಗೂ ಅರ್ಥವಾಗುವಂತೆ ಹೇಳಲಾಗಿದೆ.ಆಧ್ಯಾತ್ಮಜ್ಞಾನಕ್ಕೆ ಮಿಗಿಲಾದ ಜ್ಞಾನ ಇನ್ನೊಂದಿಲ್ಲ. ಈ ಮನುಷ್ಯ ಜನ್ಮ ಬಂದಿರುವುದೇ ಎಷ್ಟು ಕೋಟಿ ಜನ್ಮಗಳ ಪುಣ್ಯದ ಫಲದಿಂದ, ಪಶು - ಪಕ್ಷಿ - ಪ್ರಾಣಿಗಳಂತೆ ಹುಟ್ಟಿ, ತಿಂದು, ಸಾಯುವಗೋಸ್ಕರ ಈ ಮನುಷ್ಯ ಜನ್ಮ ಬಂದಿಲ್ಲ. ಇದನ್ನು ಸಾರ್ಥಕ ಪಡಿಸಿಕೊಂಡು ಆತ್ಮೋದ್ಧಾರಕ್ಕಾಗಿ ಪ್ರಯತ್ನಪಡಬೇಕು. ಆತ್ಮಸಾಕ್ಷಾತ್ಕಾರ ಪಡೆಯುವುದಕ್ಕೆ ಒಳ್ಳೆಯ ಸತ್ಸಂಗ, ಒಳ್ಳೆಯ ವಿಚಾರಗಳನ್ನು ಆಗಾಗ ಮೆಲುಕು ಹಾಕುತ್ತಾ ಹಾಗೂ ಅಧ್ಯಾತ್ಮಿಕ ಪುಸ್ತಕಗಳನ್ನು ಓದುವುದರಿಂದ ನಮ್ಮ ಮನಸ್ಸುನಿರ್ಮಲವಾಗುತ್ತದೆ. ಆದ್ದರಿಂದ ಆಧ್ಯಾತ್ಮಿಕ ಸಾಧಕರು ಇಂತಹ ಪತ್ರಿಕೆಗಳನ್ನು ಶ್ರವಣ, ಮನನ, ನಿಧಿದ್ಯಾಸ ಮಾಡಿ, ಮನಸನ್ನು ಅಂತರ್ಮುಖ ಮಾಡಿಕೊಂಡು ಆತ್ಮನ ಪರಮಾನಂದ ಪ್ರಾಪ್ತಿಯನ್ನು ಪಡೆಯಬಹುದು. ಈ ಉದ್ದೇಶಕ್ಕೋಸ್ಕರವೇ ಶಂಕರ ಶಾಂತಿ ಸಂದೇಶ ಎಂಬ ಪತ್ರಿಕೆಯನ್ನುಪ್ರಾರಂಭ ಮಾಡಲಾಗಿದೆ. ಆಧ್ಯಾತ್ಮಿಕ ಸಾಧಕರು ಈ ಪತ್ರಿಕೆಯ ಚಂದಾದಾರರಾಗಿ ಇದನ್ನು ಮತ್ತಷ್ಟು ಅಭಿವೃದ್ಧಿಗೊಳಿಸಬೇಕಾಗಿ ತಮ್ಮಲ್ಲಿ ವಿನಂತಿ.


Shankara shanthi sandesha patrike in pdf format