Gita Rahasyopanishad

ಗೀತಾ ರಹಸ್ಯೋಪನಿಷತ್ತು


ವಿವರಣೆ:


ಇದೊಂದು ಅಪೂರ್ವ ಗ್ರಂಥ ಭಗವದ್ಗೀತೆಯಲ್ಲಿ 18 ಶ್ಲೋಕಗಳನ್ನು ಆರಿಸಿ ಅವುಗಳಿಗೆ ವ್ಯಾಖ್ಯಾನವನ್ನು ಶ್ರೀಗಳು ಬರೆದಿದ್ದಾರೆ. ಇದನ್ನು ಅಧ್ಯಯನ ಮಾಡಿದರೆ ಗೀತಾ ಗ್ರಂಥವನ್ನೇ ಅಧ್ಯಯನ ಮಾಡಿದ ಪೂರ್ಣತ್ವ ಸಿದ್ಧಿ ಆಗುತ್ತದೆ. “ಗೀತಾಮೇ ಹೃದಯಂ ಪಾರ್ಥ ಗೀತಾ ಮೇ ಸಾರಮುತ್ತಮಮ್” ಭಗವಂತನು ಗೀತೆಯನ್ನು ತನ್ನ ಹೃದಯವೆಂದು ಭಗವಂತನೇ ಹೇಳಿ ಅಂತಹ ಹೃದಯ ರೂಪೀ ಗೀತೆಯನ್ನು ತನ್ನ ಅರ್ಜುನನಿಗೆ ಕೊಟ್ಟಿದ್ದಾನೆ. ಈ 18 ಶ್ಲೋಕಗಳು ಯಾವುವು ? ಎಂದು ಆಶ್ಚರ್ಯವೆ! ವೇದ ವ್ಯಾಸನು ಗಣಪತಿಯಿಂದ 18 ಪುರಾಣ, ಉಪಪುರಾಣ, ಸರ್ವಶಾಸ್ತ್ರ, ಎಲ್ಲಾ ಬರೆಸಿದ, ಬರೆಸುವಾಗ ಇಬ್ಬರಲ್ಲಿ ಒಂದು ನಿಯಮ ಸ್ಥಾಪಿತವಾಯಿತು.ನನ್ನ ಕೈನಿಲ್ಲದಂತೆ ನೀನು ಹೇಳಬೇಕೆಂದು ಗಣಪತಿಯೂ ನನ್ನ ಕೈ ನಿಂತರೆ ನಿನ್ನ ತಲೆ ಸಹಸ್ರ ಹೋಳಾಗುತ್ತದೆ ಎಂದೂ ವ್ಯಾಸರು, ನಾನು ಹೇಳಿದನ್ನು ಅರ್ಥ ಮಾಡಿಕೊಂಡು ಬರೆಯಬೇಕು.ಅರ್ಥ ಮಾಡದೆ ಬರೆದರೆ ನಿನ್ನ ಶಿರಸ್ಸು ಸಹಸ್ರ ಹೋಳಾಗುತ್ತದೆ.ಈ ನಿಯಮಕ್ಕೆ ಅನುಸಾರವಾಗಿ ಮುಂದಿನ ವಿಷಯ ಯೋಚನೆಯ ಅವಕಾಶಕ್ಕಾಗಿ ವೇದವ್ಯಾಸರು ಕ್ಲಿಷ್ಠವಾದ ಗೂಢವಾದ ರಹಸ್ಯವಾದ ಶ್ಲೋಕಗಳನ್ನು ಇಟ್ಟಿದ್ದಾರೆ. ಅವೇ ವ್ಯಾಸಗುಟ್ಟಿನ ಶೋಕಗಳೆಂದು ಜಗತ್ಪ್ರಸಿದ್ಧವಾಗಿವೆ. ಅವು ಗೀತೆಯಲ್ಲಿಯೇ 18 ಶ್ಲೋಕ ಬಂದಿವೆ.ಇದಕ್ಕೆ “ಗೀತಾ ಅಷ್ಟಾದಶಿ” ಎಂದು “ವ್ಯಾಸಗುಟ್ಟಿನ ಶ್ಲೋಕಗಳು” ಎಂದು ಪ್ರಸಿದ್ಧಿಯಾಗಿವೆ. ಇದೊಂದು ಅಪೂರ್ವವಾದ ಎಲ್ಲರೂ ಓದಲೇಬೇಕಾದ ಗ್ರಂಥ.
ಪುಟ: 426   ಬೆಲೆ: 400 ರೂ.ಗಳು